ರಾಜನೀತಿಯಲ್ಲಿ ಜಯವೋ

ರಾಜನೀತಿಯಲ್ಲಿ ಜಯವೋ
ಬಂತೋ ಇಂಗ್ಲಂಡ ದೇಶಕ್ಕೆ ಬೆಂಕಿಯ ಮಳಿಯೋ ||ಪ||

ರಾಣಿ ರಾಜರ ವೈಭವಕೆ
ಪ್ರಾಣಹಾನಿಗಳಾದಾವು ಎಣಿ ಇಲ್ಲ ಇದಕೆ
ಜಾಣ ಕಲಿಗಳ ಸೈನ್ಯ ಹೊಕ್ಕಿತೋ
ಯೂರೋಪುಖಂಡಕೆಲ್ಲ ಮುಸುಕಿತೋ
ಕಾಣದಂಥಾ ಐದು ವ್ಯಕ್ತಿ
ಕ್ಷೋಣಿ ಗದಗದ ನಡುಗಿ ಹೋದೀತು ||೧||

ಹಿಂದುಸ್ಥಾನಕ ಬಂತು ಶೋಕ
ಮಂದಿ ಕುಂಡ್ಲಾಕ ನರಬೈಲಿ ಹೋತೋ ಕೈಲಾಕ
ಹಣದ ತೆರಿಗೆಯ ತೆಲಿಗೆ ಏಳು
ಎಣಿಸಿ ಹಡಗವ ತುಂಬಿ ಹೂರಣವ
ಹವಳ ದೇಶಕ್ಕೆಲ್ಲ ಇದು
ಕುಣಿದು ಕುಣಿದು ದಣಿವು ಆದಿತು ||೨||

ಬರದೆ ಬಾರದೆ ಸುಜ್ಞಾನ
ಗುರು ಶಿಶುನಾಳಧೀಶನ ಕುರುವಿನ ವಚನ
ಸತ್ಯ ಜಗಕೆಲ್ಲ ಇದು
ಬಿದ್ದಿತೋ ಜಗಳದ ಬೀಜ
ಮತ್ತೆ ಅಣ್ಣಿಗೇರಿ ಈಶನ
ಚಿತ್ರಗುಪ್ತರು ಕಾಣದೆ ಹೋದೀತು ||೩||

****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲೆವೆಲ್ ಕ್ರಾಸಿಂಗ್
Next post ಛಾಯೆ

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys